ಅಸೈನ್ಮೆಂಟ್ 8

                 ಅಸೈನ್ಮೆಂಟ್  - 8

ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ.
 
ಮಕ್ಕಳ ಕಲಿಕೆಗೆ ಸಹಾಯವಾಗುವಂತಹ ವಿವಿಧ ಪಾಠಗಳ ರಸಪ್ರಶ್ನೆಗಳ ವಿವರ....

  ಶಿಕ್ಷಕರ ಹೆಸರು :- ರಘುಪತಿ ರೆಡ್ಡಿ ಪಿ


೧) ಇತಿಹಾಸದ ಪಿತಾಮಹ ಯಾರು?
ಉ:- ಹೆರೋಡಾಟಸ್

೨) ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ:- ಅಶೋಕ

೩) ಕಲ್ಹಣನ ಕೃತಿ ಯಾವುದು?
ಉ:- ರಾಜತರಂಗಿಣಿ

೪) ಪ್ರಸಿದ್ಧ ಜೋಗ ಜಲಪಾತ ಯಾವ ನದಿಗೆ ಇದೆ?
ಉ:- ಶರಾವತಿ

೫) ಆಲಮಟ್ಟಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ?
ಉ:-ಕೃಷ್ಣಾ ನದಿ

೬) ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ?
ಉ:-೩೦

೭) ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳು ಎಷ್ಟು?
ಉ:-6 ಜಿಲ್ಲೆಗಳು

೮) ಕಾವೇರಿ ನದಿಯ ಉಗಮ ಸ್ಥಾನ ಯಾವುದು?
ಉ:-ತಲಕಾವೇರಿ

೯) ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು?
ಉ:-ಬೆಳಗಾವಿ

೧೦) ಮೂಲಭೂತ ಹಕ್ಕುಗಳು ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ?
ಉ:-ಭಾಗ-3

೧೧) ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದಿಂದ ಪಡೆಯಲಾಗಿದೆ?
ಉ:-ಐರಿಶ್ ಸಂವಿಧಾನ 

೧೨) ಮೈಸೂರು ಹುಲಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಟಿಪ್ಪು ಸುಲ್ತಾನ್

೧೩) ಸಂವಿಧಾನ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಡಾ. ಬಿ ಆರ್ ಅಂಬೇಡ್ಕರ್

೧೪) ಮೂಲಭೂತ ಕರ್ತವ್ಯಗಳು ಎಷ್ಟು?
ಉ:-೧೧

೧೫) ಮಹೆಂಜೋದಾರೋ ಎಂಬುದರ ಅರ್ಥ ಏನು?
ಉ:-ಸತ್ತವರ ದಿಬ್ಬ ಎಂದರ್ಥ

೧೬) ಕರ್ನಾಟಕ ಸಂಗೀತ ಪಿತಾಮಹ ಯಾರು?
ಉ:-ಪುರಂದರ ದಾಸರು

೧೭) ಕನಕದಾಸರ ಅಂಕಿತ ಯಾವುದು?
ಉ:-ಕಾಗಿನೆಲೆ ಆದಿಕೇಶವ

೧೮) ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು?
ಉ:-ಅಲ್ಲಮಪ್ರಭು

೧೯) ಕನ್ನಡ ಸಾಹಿತ್ಯ ಪರಿಷತ್ತು ಯಾವಾಗ ಸ್ಥಾಪನೆಯಾಯಿತು?
ಉ:-1915

೨೦) ಅಕ್ಕಮಹಾದೇವಿ ಅವರ ಜನ್ಮಸ್ಥಳ ಯಾವುದು?
ಉ:-ಶಿವಮೊಗ್ಗ ಜಿಲ್ಲೆ ಉಡುತಡಿ

೨೧) ಕಾಯಕವೇ ಕೈಲಾಸ ಇದನ್ನು ಹೇಳಿದವರು ಯಾರು?
ಉ:-ಬಸವಣ್ಣನವರು

೨೨) ವೈಪರೀತ್ಯಗಳ ಖಂಡ ಎಂದು ಯಾವುದನ್ನು ಕರೆಯುತ್ತಾರೆ?
ಉ:- ಏಷ್ಯಾ ಖಂಡ

೨೩) ಅತಿ ಚಿಕ್ಕ ಗ್ರಹ ಯಾವುದು?
ಉ:-ಬುಧ ಗ್ರಹ

೨೪) ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
ಉ:-ಗುರು ಗ್ರಹ

೨೫) ಭಾರತದ ರಾಷ್ಟ್ರೀಯ ವೃದ್ಧ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
ಉ:-ದಾದಾಬಾಯಿ ನವರೋಜಿ

೨೬) ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು?
ಉ:-ಹರಿಹರ ಮತ್ತು ಬುಕ್ಕರಾಯ

೨೭) ಶ್ರೀಕೃಷ್ಣ ದೇವರಾಯನ ಎರಡು ಕೃತಿಗಳನ್ನು ತಿಳಿಸಿ?
ಉ:-ಅಮುಕ್ತಮಾಲ್ಯದ, ಜಾಂಬವತಿ ಕಲ್ಯಾಣ

೨೮) ಶ್ರೀಕೃಷ್ಣ ದೇವರಾಯ ಅಪ್ಪಾಜಿ ಎಂದು ಯಾರನ್ನು ಕರೆಯುತ್ತಿದ್ದರು?
ಉ:-ತಿಮ್ಮರಸ

೨೯) ತಾಳಿಕೋಟೆ ಕದನ ಯಾವಾಗ ನಡೆಯಿತು?
ಉ:-1565 ಜನೆವರಿ 23

೩೦) ಬೀದರ್ನಲ್ಲಿ ಮದರಸವನ್ನು ಕಟ್ಟಿಸಿದವರು ಯಾರು?
ಉ:-ಮಹಮ್ಮದ್ ಗವಾನ್

೩೧) ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ ಯಾರು?
ಉ:-ಸಳ

೩೨) ಕರ್ನಾಟಕವನ್ನು ಆಳಿದ ಮೊದಲ ರಾಜವಂಶ ಯಾವುದು?
ಉ:-ಕದಂಬ ವಂಶ

೩೩) ಅಮೆಜಾನ್ ಕಾಡುಗಳು ಎಲ್ಲಿ ಕಂಡು ಬರುತ್ತವೆ?
ಉ:-ದಕ್ಷಿಣ ಅಮೆರಿಕ ಖಂಡ

೩೪) ಸಮಭಾಜಕ ವೃತ್ತವನ್ನು ಎರಡು ಸಲ ದಾಟುವ ನದಿಯಾವುದು?
ಉ:-ಕಾಂಗೋ ಅಥವಾ ಜೈರೆ

೩೫) ಹೋಮ್ಸ್ ಎಂದು ಕರೆಯಲ್ಪಡುವ ಪಂಚ ಸರೋವರಗಳ ಎಲ್ಲಿ ಕಂಡುಬರುತ್ತವೆ?
ಉ:-ಉತ್ತರ ಅಮೆರಿಕ ಖಂಡ

೩೬) ಡಾಗರ್ ಬ್ಯಾಂಕ್ ಎಂಬುದು ಒಂದು ಮೀನುಗಾರಿಕಾ ಕೇಂದ್ರ ಇದು ಎಲ್ಲಿ ಕಂಡುಬರುತ್ತದೆ?
ಉ:-ಯುರೋಪ್ ಖಂಡ

೩೭) ಕುತುಬ್ ಮಿನಾರ್ ಅನ್ನು ಕಟ್ಟಿಸಿದವರು ಯಾರು?
ಉ:-ಕುತುಬುದ್ದಿನ್ ಐಬಕ್

೩೮) ದೆಹಲಿಯನ್ನಾಳಿದ ಪ್ರಥಮ ಸಾಮ್ರಾಜ್ಞಿ ಯಾರು?
ಉ:-ರಜಿಯಾ ಸುಲ್ತಾನ್

೩೯) ತಾಜ್ ಮಹಲನ್ನು ಕಟ್ಟಿದವರು ಯಾರು?
ಉ:-ಶಹಜಹಾನ್

೪೦) ಜಗದ್ಗುರು ಬಾದಶಾಹ ಎಂದು ಬಿರುದು ಪಡೆದವರು ಯಾರು?
ಉ:-ಎರಡನೇ ಇಬ್ರಾಹಿಂ

೪೧) ಭಾರತದ ಅತಿ ದೊಡ್ಡ ಗುಮ್ಮಟ ಯಾವುದು?
ಉ:-ವಿಜಯಪುರದ ಗೋಲಗುಮ್ಮಟ

೪೨) ಬ್ರಹ್ಮ ಸಮಾಜದ ಸ್ಥಾಪಕರು ಯಾರು?
ಉ:-ರಾಜ ರಾಮ್ ಮೋಹನ್ ರಾಯ್

೪೩) ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು ಯಾರು? ಉ:-ಸ್ವಾಮಿ ದಯಾನಂದ ಸರಸ್ವತಿ

೪೪) din-e-ilahi ಧಾರ್ಮಿಕ ಸಂಘವನ್ನು ಸ್ಥಾಪಿಸಿದವರು ಯಾರು? ಉ:-ಅಕ್ಬರ್ ಮಹಾಶಯ

೪೫) ಜೈನ ಧರ್ಮದ ಸ್ಥಾಪಕರು ಯಾರು?
ಉ:-ವರ್ಧಮಾನ ಮಹಾವೀರ

೪೬) ಬುದ್ಧನ ಮೊದಲ ಹೆಸರೇನು?
ಉ:-ಸಿದ್ದಾರ್ಥ

೪೭) ಹರ್ಷವರ್ಧನನನ್ನು ಸೋಲಿಸಿ ಪರಮೇಶ್ವರ ಬಿರುದು ಪಡೆದ ಚಾಲುಕ್ಯರ ದೊರೆ ಯಾರು?
ಉ:-ಇಮ್ಮಡಿ ಪುಲಿಕೇಶಿ

೪೮) ಜಲಿಯನ್ ವಾಲ್ ಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು?
ಉ:-1919

೪೯) ಪ್ಲಾಸಿ ಕದನ ಯಾವಾಗ ನಡೆಯಿತು?
ಉ:-1757 ರಲ್ಲಿ

೫೦) ಶಿವಾಜಿಯ ತಾಯಿಯ ಹೆಸರೇನು?
ಉ:-ಜೀಜಾಬಾಯಿ

೫೧) ಶಿವಾಜಿಯ ರಾಜಕೀಯ ಗುರು ಯಾರು?
ಉ:-ದಾದಾಜಿ ಕೊಂಡದೇವ

೫೨) ಗುಪ್ತ ಸಾಮ್ರಾಜ್ಯದ ಸ್ಥಾಪಕ ಯಾರು?
ಉ:-ಶ್ರೀ ಗುಪ್ತ

೫೩) ಕದಂಬ ವಂಶದ ಸ್ಥಾಪಕ ಯಾರು?
ಉ:-ಮಯೂರವರ್ಮ

೫೪) ಶಾತವಾಹನ ಮನೆತನದ ಪ್ರಸಿದ್ಧ ದೊರೆ ಯಾರು?
ಉ:-ಗೌತಮಿ ಪುತ್ರ ಶಾತಕರ್ಣಿ

೫೫) ವಂದೇ ಮಾತರಂ ಗೀತೆಯನ್ನು ಬರೆದವರು ಯಾರು?
ಉ:-ಬಂಕಿಮ ಚಂದ್ರ ಚಟರ್ಜಿ

೫೬) ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ ಎಂದು ಹೇಳಿದವರು ಯಾರು?
ಉ:-ಬಾಲಗಂಗಾಧರ ತಿಲಕ್

೫೭) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು?
ಉ:-ಲಾರ್ಡ್ ಡಾಲ್ ಹೌಸಿ

೫೮) ಶ್ರವಣಬೆಳಗೊಳದ ಗೊಮ್ಮಟೇಶ್ವರನ ವಿಗ್ರಹ ಕೆತ್ತಿಸಿದವರು ಯಾರು?
ಉ:-ಚಾವುಂಡರಾಯ

೫೯) ಕಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಉ:-ಲಾರ್ಡ್ ಕಾರ್ನ್ ವಾಲಿಸ್

೬೦) ಕೌಟಿಲ್ಯನ ಇನ್ನೊಂದು ಹೆಸರು ಏನು?
ಉ:-ವಿಷ್ಣುಗುಪ್ತ

೬೧) ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?
ಉ:-ವಾಸ್ಕೋಡಿಗಾಮ

೬೨) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು?
ಉ:-1600

೬೩) ಭಾರತದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ?
ಉ:-ಸರ್ದಾರ  ವಲ್ಲಭಾಯ್ ಪಟೇಲ್

೬೪) ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ಮಂಡಿಸಿದರು ಯಾರು?
ಉ:-ದಾದಾಬಾಯಿ ನವರೋಜಿ

೬೫) ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತನ್ನು ಹೇಳಿದವರು ಯಾರು?
ಉ:-ಸ್ವಾಮಿ ವಿವೇಕಾನಂದ

೬೬) ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು?
ಉ:-ಬಾಬು ರಾಜೇಂದ್ರ ಪ್ರಸಾದ್

೬೭) ಇಂಡಿಯನ್ ನ್ಯಾಷನಲ್  ಆರ್ಮಿಯನ್ನು ಸ್ಥಾಪಿಸಿದವರು ಯಾರು?
ಉ:-ಸುಭಾಷ್ ಚಂದ್ರ ಬೋಸ್

೬೮) ಸಂವಾದ ಕೌಮುದಿ ಕೃತಿಯನ್ನು ಬರೆದವರು ಯಾರು?
ಉ:-ರಾಜ ರಾಮ್ ಮೋಹನ್ ರಾಯ್

೬೯) ಗಾಂಧೀಜಿಯವರ ರಾಜಕೀಯ ಗುರು ಯಾರು?
ಉ:-ಗೋಪಾಲಕೃಷ್ಣ ಗೋಖಲೆ

೭೦) ಓಬವ್ವನ ಕಿಂಡಿ ಎಲ್ಲಿ ಕಂಡುಬರುತ್ತದೆ?
ಉ:-ಚಿತ್ರದುರ್ಗ ಕೋಟೆಯಲ್ಲಿ

೭೧) ಕಿತ್ತೂರು ರಾಣಿ ಚೆನ್ನಮ್ಮನ ನಂಬಿಕೆಯ ಭಂಟ ಯಾರಾಗಿದ್ದರು?
ಉ:-ಸಂಗೊಳ್ಳಿ ರಾಯಣ್ಣ

೭೨) ರಾಜ್ಯ ಶಾಸ್ತ್ರದ ಪಿತಾಮಹ ಯಾರು?
ಉ:-ಅರಿಸ್ಟಾಟಲ್

೭೩) ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು?
ಉ:-ಸರ್ ವಿಲಿಯಂ ಜೋನ್ಸ್

೭೪) ಬೆಂಗಳೂರಿನ ನಿರ್ಮಾಪಕರು ಯಾರು?
ಉ:-ನಾಡಪ್ರಭು ಕೆಂಪೇಗೌಡರು

೭೫) ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
ಉ:-ಶ್ರೀರಂಗಪಟ್ಟಣ ಒಪ್ಪಂದ

೭೬) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಲ್ಲಿಂದ ಪ್ರಾರಂಭವಾಯಿತು?
ಉ:-ಮೀರತ್

೭೭) ದಂಡಿ ಸತ್ಯಾಗ್ರಹ ಯಾವಾಗ ನಡೆಯಿತು?
ಉ:-1930

೭೮) ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ?
ಉ:-ಹತ್ತು ವರ್ಷಗಳಿಗೊಮ್ಮೆ

೭೯) ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು?
ಉ:-ಚೀನಾ

೮೦) ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು?
ಉ:-ಮೌಸಿನ್ ರಾಮ್

೮೧) ಮೊದಲ ರಾಷ್ಟ್ರ ಕವಿಗಳು ಯಾರು?
ಉ:-ಎಂ ಗೋವಿಂದ ಪೈ

೮೨) ಕನ್ನಡದ ಸಂಧಿಗಳು ಎಷ್ಟು?
ಉ:-ಕನ್ನಡದ ಸಂಧಿಗಳು 3 ಲೋಪ ಸಂಧಿ, ಆಗಮ ಸಂಧಿ, ಆದೇಶ ಸಂಧಿ

೮೩)ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕವಿಗಳು ಯಾರು?
ಉ:-ಕುವೆಂಪು

೮೪) ಕನ್ನಡದ ಮೊದಲ ಉಪಲಬ್ದ ಗ್ರಂಥ ಯಾವುದು?
ಉ:-ವಡ್ಡಾರಾಧನೆ

೮೫) ಅಂಬಿಕಾತನಯದತ್ತ ಇದು ಯಾರ ಕಾವ್ಯನಾಮ?
ಉ:- ದ ರಾ ಬೇಂದ್ರೆ

೮೬) ಕನ್ನಡದ ಆಸ್ತಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಮಾಸ್ತಿ ವೆಂಕಟೇಶ ಅಯ್ಯಂಗಾರ್

೮೭) ಸೂರ್ಯ ಈ ಪದದ ಸಮಾನಾರ್ಥಕ ಪದಗಳನ್ನು ತಿಳಿಸಿರಿ?
ಉ:-ರವಿ, ಭಾನುತೇಜ,ಶಶಿಧರ

೮೮) ಕನ್ನಡದ ಮೊದಲ ಶಾಸನ ಯಾವುದು?
ಉ:-ಹಲ್ಮಿಡಿ ಶಾಸನ

೮೯) ಸಣ್ಣ ಕಥೆಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
ಉ:-ಮಾಸ್ತಿ ವೆಂಕಟೇಶ್ ಅಯ್ಯಂಗಾರ್

೯೦) ಕನ್ನಡದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?
ಉ:-ಆಲೂರು ವೆಂಕಟರಾಯರು

೯೧) ಕನ್ನಡದ ರತ್ನತ್ರಯರು ಯಾರು?
ಉ:-ಪಂಪ ಪೊನ್ನ ರನ್ನ

೯೨) ಷಟ್ಪದಿಯ ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ?
ಉ:-ರಾಘವಾಂಕ

೯೩) ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಕುಮಾರವ್ಯಾಸ

೯೪) ಕನ್ನಡಕ್ಕೆ ಇಲ್ಲಿಯವರೆಗೆ ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ?
ಉ:-ಎಂಟು ಪ್ರಶಸ್ತಿಗಳು

೯೫) ಬಡವ ಪದದ ವಿರುದ್ಧಾರ್ಥಕ ಪದ ತಿಳಿಸಿ?
ಉ:-ಶ್ರೀಮಂತ

೯೬) ಕನ್ನಡದ ಸ್ವರಗಳು ಎಷ್ಟು?
ಉ:-೧೩

೯೭) ಮಗು ಈ ಪದದ ಬಹುವಚನ ರೂಪ ತಿಳಿಸಿ?
ಉ:-ಮಕ್ಕಳು

೯೮) ಕವಿತ್ರಿ ಇದು ಯಾವ ಲಿಂಗ?
ಉ:-ಸ್ತ್ರೀಲಿಂಗ

೯೯) 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು?
ಉ:-ರಾಯಚೂರು

೧೦೦) ಗಿಡ ಮರ ಪದ್ಯದ ಲೇಖಕರು ಯಾರು?
ಉ:-ಸತ್ಯಾನಂದ ಪತ್ರೋಟ


   

Comments