ಅಸೈನ್ಮೆಂಟ್ - 9 ಶಿಕ್ಷಕರ ಹೆಸರು:- ರಘುಪತಿ ರೆಡ್ಡಿ ಪಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ ತಾ/ಜಿ/ ರಾಯಚೂರು. **** ಸದರಿ ಮನೆಯಿಂದಲೇ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳು ಲೇಖನ**** ಕಲಿಕೆ ನಿರಂತರವಾದದ್ದು ಅದು ನಿಂತ ನೀರಾಗಬಾರದು. ನಾವು ಇಂದು ಶಿಕ್ಷಕ ವೃತ್ತಿಯಲ್ಲಿ ಭಾಗಿಯಾಗಿದ್ದರು ಅದರಲ್ಲಿ ಯಶಸ್ಸು ಪಡೆಯಬೇಕೆಂದರೆ ಇನ್ನೂ ಹೆಚ್ಚಿನ ಜ್ಞಾನ, ತಿಳುವಳಿಕೆ, ತರಬೇತಿ ಅವಶ್ಯಕವಾಗಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವುದೇ ಶಿಕ್ಷಕ ವೃತ್ತಿಯ ಮುಖ್ಯ ಗುರಿ. 1. ವೃತ್ತಿ ನೈಪುಣ್ಯತೆಗಾಗಿ ಇಲಾಖೆಯ ಸಮಾಜ ವಿಜ್ಞಾನ ಮತ್ತು ಕನ್ನಡ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಪಡೆದಿರುತ್ತೇನೆ ಹಾಗೂ ಅವರು ಸೂಚಿಸಿರುವ ಹಲವು ಚಟುವಟಿಕೆ ಆಧಾರಿತ ಪಾಠ ಬೋಧನೆ ಯೋಜನೆಯನ್ನು ತಯಾರಿಸಿಕೊಂಡಿರುತ್ತೇನೆ. 2. ವೃತ್ತ ಪತ್ರಿಕೆ, ಕಥೆ, ಕಾದಂಬರಿ ಮತ್ತು ಮ್ಯಾಕ್ಸಿನ್ ಗಳನ್ನು ಸಂಗ್ರಹಿಸಿ ಓದಿದ್ದೇನೆ. 3. 6 ರಿಂದ 8ನೇ ತರಗತಿಯ ಸಮಾಜ ವಿಜ್ಞಾನ ಪಾಠೋಪಕರಣಗಳನ್ನು ತಯಾರಿಸಿಕೊಂಡಿದ್ದೇನೆ. 4. ಸೇತುಬಂದ ಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಸಾಮರ್ಥ್ಯಗಳ ಪಟ್ಟಿ ಸಿದ್ಧಪಡಿಸಿದ್ದೇನೆ. 5. ಕನ್ನಡ ಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೌಲ್ಯಾಧಾರಿತ ಕೆಲವು ಸಿನಿಮಾಗಳನ್ನು...